Pages

ಗಂಗ (ರಾಜಮನೆತನ)

ಗಂಗರು ಸುಮಾರು ೪ನೇ ಶತಮಾನದಿಂದ ಸುಮಾರು ೧೦ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ. ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಧಗಳನ್ನು ಬೆಳಸಿ ಸರಿಸಮಾನರಾಗಿ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು (ಇಂದಿನ ಕೋಲಾರ). ೮ನೆಯ ಶತಮಾನದ ದೊರೆ ಶ್ರೀಪುರುಷ ತಲಕಾಡಿನಿಂದ ಆಳಲು ತೊಡಗಿದನು. ಇದಲ್ಲದೆ ಮಾನ್ಯಪುರದಲ್ಲಿ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ರಾಜನಿವಾಸ ಏರ್ಪಟ್ಟಿತ್ತು. ನಂದಿಬೆಟ್ಟ ಗಂಗರಾಜ್ಯದಲ್ಲಿದ್ದ ಪ್ರಮುಖ ಗಿರಿದುರ್ಗ.
ಗಂಗ ನಾಡಿನ ತಿರುಳುಭಾಗವನ್ನು ಗಂಗವಾಡಿ ಎಂದು ಕರೆಯಲಾಗುತ್ತಿತ್ತು. ಇದು ೯೬೦೦೦ ಗ್ರಾಮಗಳ ಘಟಕ - ಶಾಸನಗಳಲ್ಲಿ ಗಂಗವಾಡಿ ತೊಂಭತ್ತಱುಸಾಸಿರ ಎಂದೇ ಸಾಮಾನ್ಯವಾದ ಉಲ್ಲೇಖ. ಗಂಗವಾಡಿಯ ನಾಗರಿಕರೆ ಗಂಗವಾಡಿಕಾರರು. ಈ ಹೆಸರು ಇಂದಿಗೂ ಗಂಗಡಿಕಾರ ಎಂದಾಗಿ ಉಳಿದಿಕೊಂಡು ಬಂದಿದೆ.

Loading
ಗಂಗರು ಸ್ಥಳಿಯರಾಗಿದ್ದು ಕೋಲಾರ,ಬೆಂಗಳೂರು,ತುಮಕೂರು,ಮೈಸೂರು,ಚಾಮರಾಜನಗರ,ಮಂಡ್ಯ,ಹಾಸನ ಜಿಲ್ಲೆಗಳನ್ನು ಒಳಗೊಂಡಂತೆ ದಕ್ಷಿಣ ಕರ್ನಾಟಕದಲ್ಲಿ ಶಾತವಾಹನರ ನಂತರ ಅಧಿಕಾರಕ್ಕೆ ಬಂದರು. ರೈತ ಸಮುದಾಯಕ್ಕೆ ಸೇರಿದವರಾಗಿದ್ದರು. ಇವರ ಮೊದಲ ರಾಜಧಾನಿ ಕೋಲಾರ.ನಂತರ ತಲಕಾಡಿನಿಂದ ಆಳಿದರು. ಚನ್ನಪಟ್ಟಣ ಬಳಿಯ ಮಾಕುಂದ ಮತ್ತು ನೆಲಮಂಗಲ ಬಳಿಯ ಮಣ್ಣೆ ಇವರ ಉಪ ರಾಜಧಾನಿಗಳಾಗಿದ್ದವು.ಇವರು ಕ್ರಿ.ಶ.೩ನೇಶತಮಾನದಿಂದ ೧೦ನೇಶತಮಾನದವರೆಗೆ ಸುಮಾರು ೮೦೦ ವರ್ಷಗಳ ಕಾಲ ಸುಧೀರ್ಘ ಆಳ್ವಿಕೆ ನಡೆಸಿದರು.ಇವರು ಜೈನಧರ್ಮಕ್ಕೆ ವಿಶೇಷ ಹೊತ್ತು ನೀಡಿದರು. ಗಂಗರಲ್ಲಿ ಪ್ರಸಿದ್ಧನಾದ ದೊರೆ ಶ್ರೀಪುರುಷನು ರಾಷ್ಟ್ರಕೂಟರ ವಿರುದ್ಧ ಸುಧೀರ್ಘ ಕಾಲ ಹೋರಾಟ ನಡೆಸಿದನು. ಶ್ರೀಪುರುಷನು ಕುಣಿಗಲ್ಲಿನ ದೊಡ್ಡಕೆರೆಯನ್ನು ನಿರ್ಮಿಸಿದನು. ರಾಚಮಲ್ಲನ ಮಂತ್ರಿಯಾದ ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಸು. ಕ್ರಿ.ಶ. ೯೮೦ರಲ್ಲಿ ಗೊಮ್ಮಟೇಶ್ವರನ ಏಕಶಿಲಾ ಮಹಾಮೂರ್ತಿಯನ್ನು ಕಡೆಸಿದನು. ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕೊನೆಗೊಂಡಿತು.

ಪ್ರಸಿದ್ಧ ರಾಜರುಗಳು

೨ನೇ ಮಾರ ಸಿಂಹ ಮತ್ತು ೪ನೇ ರಾಚಮಲ್ಲ

ಇತರ ರಾಜಮನೆತನಗಳೊಂದಿಗೆಗಿನ ಸಂಬಂಧಗಳು

 


ಗಂಗರ ಸಾಮ್ರಾಜ್ಯದ ವಿಸ್ತಾರ


No comments:

Post a Comment